top of page

ಸಾರ್ವಜನಿಕ ಸಂವಹನ: ಬೆಂಗಳೂರು ಪೊಲೀಸ್ ಇಲಾಖೆ AI ಅವತಾರ ಅಳವಡಿಕೆ

  • Writer: new waves technology
    new waves technology
  • Nov 16, 2024
  • 1 min read

ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಇತ್ತೀಚೆಗೆ ಶಿವಾಜಿ ಸರ್ಕಲ್ ಮತ್ತು ಜ್ಯೋತಿ ಕೆಫೆಯಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಟ್ರಾಫಿಕ್ ತಿರುವುಗಳ ಕುರಿತು ಚರ್ಚಿಸುತ್ತಿರುವ ಎಐ-ರಚಿಸಿದ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು.










ಬೆಂಗಳೂರು: ಪ್ರಮುಖ ಘಟನೆಗಳು ಮತ್ತು ಸಲಹೆಗಳೊಂದಿಗೆ ಸಾರ್ವಜನಿಕರನ್ನು ತ್ವರಿತವಾಗಿ ತಲುಪಲು, ಬೆಂಗಳೂರು ನಗರ ಪೊಲೀಸರು ವೀಡಿಯೊ ಬ್ರೀಫಿಂಗ್‌ಗಳಲ್ಲಿ ಹಿರಿಯ ಅಧಿಕಾರಿಗಳನ್ನು ಪ್ರತಿನಿಧಿಸಲು ಕೃತಕ ಬುದ್ಧಿಮತ್ತೆ (AI) ರಚನೆಯನ್ನು ಅಳವಡಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ, ವಿವಿಧ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಎಐ- ರಚಿತ ಮೂರು ವೀಡಿಯೊಗಳನ್ನು ಅಧಿಕೃತ ಬೆಂಗಳೂರು ನಗರ ಪೊಲೀಸ್ ಪುಟಗಳಿಗೆ ಅಪ್‌ಲೋಡ್ ಮಾಡಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಇತ್ತೀಚೆಗೆ ಶಿವಾಜಿ ಸರ್ಕಲ್ ಮತ್ತು ಜ್ಯೋತಿ ಕೆಫೆಯಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಟ್ರಾಫಿಕ್ ತಿರುವುಗಳ ಕುರಿತು ಚರ್ಚಿಸುತ್ತಿರುವ ಎಐ-ರಚಿಸಿದ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ದೃಶ್ಯಗಳು ಮತ್ತು ಧ್ವನಿ ಎರಡನ್ನೂ ಒಳಗೊಂಡಂತೆ ಸಂಪೂರ್ಣ ವೀಡಿಯೊವನ್ನು ಎಐ ಉಪಕರಣವನ್ನು ಬಳಸಿಕೊಂಡು ರಚಿಸಲಾಗಿದ್ದು, ಅನುಚೇತ್ ಅವರ ಡಿಜಿಟಲ್ ಅವತಾರ ಸಂದೇಶವನ್ನು ನೀಡುತ್ತದೆ.

ಹೆಚ್ಚುವರಿಯಾಗಿ, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರ ಎಐ ಅವತಾರವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.


ಹಿರಿಯ ಅಧಿಕಾರಿಯೊಬ್ಬರು ಇದನ್ನು ಪೊಲೀಸ್ ಇಲಾಖೆಯು ಎಐ-ರಚಿತ ಅವತಾರವನ್ನು ಬಳಸುವ ಅಪರೂಪದ ನಿದರ್ಶನ ಎಂದು ವಿವರಿಸಿದ್ದಾರೆ. ಈ ತಂತ್ರಜ್ಞಾನದೊಂದಿಗೆ, ಸರಳ ಪಠ್ಯ ಪ್ರಾಂಪ್ಟ್‌ಗಳಿಂದ ವೀಡಿಯೊಗಳನ್ನು ರಚಿಸಬಹುದು, ವರ್ಚುವಲ್ ಭಾಷಣ ಮಾದರಿಗಳು ಮತ್ತು ಲಿಪ್ ಸಿಂಕ್ರೊನೈಸೇಶನ್ ನ್ನು ಒಳಗೊಂಡಿರುತ್ತದೆ.

ಅಧಿಕಾರಿಗಳು ತಮ್ಮ ಸಂದೇಶಗಳನ್ನು ಪಠ್ಯವಾಗಿ ನೀಡುತ್ತಾರೆ. ಸದ್ಯ ಪೊಲೀಸರು ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ. ಸಾಂಪ್ರದಾಯಿಕ ವೀಡಿಯೊ ಚಿತ್ರೀಕರಣಕ್ಕಿಂತ ಈ ತಂತ್ರಜ್ಞಾನವು ಸಮಯವನ್ನು ಉಳಿಸುತ್ತದೆ. ಟ್ರಾಫಿಕ್ ಸಲಹೆಗಳು, ಮಾರ್ಗ ನಕ್ಷೆಗಳೊಂದಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಾಗರಿಕರಿಗೆ ಸಹಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ತುರ್ತು ಪ್ರಕಟಣೆಗಳು, ಸುರಕ್ಷತಾ ಎಚ್ಚರಿಕೆಗಳು ಮತ್ತು ಟ್ರಾಫಿಕ್ ಡೈವರ್ಶನ್ ಅಪ್‌ಡೇಟ್‌ಗಳನ್ನು ಒದಗಿಸುವ ಮೂಲಕ ಸಾರ್ವಜನಿಕರನ್ನು ವೇಗವಾಗಿ ತಲುಪುವುದು ಇದರ ಉದ್ದೇಶವಾಗಿದೆ ಎಂದರು.

Comments


bottom of page