top of page

Maharashtra, Jharkhand Election Results 2024 Live updates: ಮಹಾರಾಷ್ಟ್ರದಲ್ಲಿ ಮಹಾಯುತಿ, ಜಾರ್ಖಂಡ್ ನಲ್ಲಿ INDIA bloc ಗೆಲುವು

  • Writer: new waves technology
    new waves technology
  • Nov 23, 2024
  • 4 min read

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.










ಇಂದು ಬೆಳಗ್ಗೆ 10 ಗಂಟೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಜಾರ್ಖಂಡ್ ನಲ್ಲಿ ಎನ್ ಡಿಎ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಬ್ಲಾಕ್ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಜಾರ್ಖಂಡ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆಗಳನ್ನು ನಡೆಸಲಾಯಿತು, ಶೇಕಡಾ 67.74 ರಷ್ಟು ಮತದಾನವಾಗಿದೆ-ನವೆಂಬರ್ 15, 2000 ರಂದು ಜಾರ್ಖಂಡ್ ರಾಜ್ಯ ರಚನೆಯಾದ ನಂತರ ಅತಿ ಹೆಚ್ಚು ಮತದಾನವಾಗಿದೆ.

ಬುಧವಾರ ನಡೆದ ಬಹುತೇಕ ಎಕ್ಸಿಟ್ ಪೋಲ್‌ಗಳು ಜಾರ್ಖಂಡ್‌ನಲ್ಲಿ ಎನ್‌ಡಿಎ ಗೆಲುವನ್ನು ಸೂಚಿಸಿದ್ದರೆ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತದ ಮುನ್ಸೂಚನೆ ನೀಡಿತ್ತು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 41 ಆಗಿದೆ.


Summary

ಮಹಾರಾಷ್ಟ್ರದಲ್ಲಿ ಗೆಲುವಿಗೆ ಅರ್ಧದ ಗಡಿ ದಾಟಿದ ಮಹಾಯುತಿ

ಇಂದು ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಆರಂಭಿಕ ಮುನ್ನಡೆಯೊಂದಿಗೆ 161 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮೈತ್ರಿಕೂಟದ ಪಾಲುದಾರರಾದ ಏಕನಾಥ್ ಶಿಂಧೆ ಅವರ ಶಿವಸೇನೆ 47 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಆಪ್ ನೇತೃತ್ವದ ಎಂವಿಎ 103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 38 ಸ್ಥಾನಗಳಲ್ಲಿ, ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) 34 ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಎಂವಿಎ ಒಕ್ಕೂಟದ ಭಾಗವಾಗಿರುವ ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ (PWPI) ಮತ್ತು ಸಮಾಜವಾದಿ ಪಕ್ಷ (SP) ಕ್ರಮವಾಗಿ 2 ಮತ್ತು 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಮಹಾಯುತಿ: 161 (ಬಿಜೆಪಿ: 85, ಎಸ್‌ಎಚ್‌ಎಸ್: 47, ಎನ್‌ಸಿಪಿ: 27)

MVA: 103 (INC: 38, NCP (SP): 34, SS (UBT): 28)

ಇತರೆ: 12

Advertisement

ADVERTISEMENT

Ads by

7:45 am, 23 Nov 2024

Summary

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಧ್ಯಾಹ್ನದ ವೇಳೆಗೆ ಯಾರಿಗೆ ಗೆಲುವು ಎಂಬುದು ಸ್ಪಷ್ಟವಾಗಲಿದೆ.

ಜಾರ್ಖಾಂಡ್ ವಿಧಾನಸಭಾ ಕ್ಷೇತ್ರದಲ್ಲಿ 81 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನವೆಂಬರ್ 13ರಂದು ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಹಾಗೂ ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

ಇನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಕೂಡ ಇಂದು ಪ್ರಕಟಗೊಳ್ಳಲಿದ್ದು, ಯಾರಿಗೆ ಗೆಲುವು ಎಂಬುದು ಇಂದು ಬಹಿರಂಗಗೊಳ್ಳಲಿದೆ.

ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ

7:57 am, 23 Nov 2024

ಮುಖ್ಯಮಂತ್ರಿ ಗಾದಿಗಾಗಿ ಎಂವಿಎ-ಮಹಾಯುತಿ ನಡುವೆ ಫೈಟ್‌: ಯಾರಾಗಲಿದ್ದಾರೆ 'ಮಹಾ' ಸಾರಥಿ?

8:05 am, 23 Nov 2024

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಿದೆ.

8:21 am, 23 Nov 2024

ಪ್ರಸ್ತುತ ವಾತಾವರಣ ಇಂಡಿಯಾ ಬಣದ ಪರವಾಗಿದ್ದು, ಗೆಲ್ಲುವ ವಿಶ್ವಾಸವಿದೆ: ಅಶೋಕ್ ಗೆಹ್ಲೋಟ್

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಲ್ಲಿ ಇಂಡಿಯಾ ಬಣ ಒಗ್ಗಟ್ಟಿನಿಂದ ಜನರ ಮುಂದೆ ಹೋಗಿದ್ದು, ಪ್ರಸ್ತುತದ ವಾತಾವರಣ ನಮ್ಮ ಪರವಾಗಿದೆ. ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷಾ ವರದಿಗಳನ್ನು ತಳ್ಳಿಹಾಕಿದ್ದು, ಇಂಡಿಯಾ ಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಎಕ್ಸಿಟ್ ಪೋಲ್‌ಗಳು ನಮ್ಮ ವಿರುದ್ಧ ಫಲಿತಾಂಶವನ್ನು ನೀಡಿದೆ, ಹರಿಯಾಣದಲ್ಲಿ ನಮ್ಮ ಪರ ಭವಿಷ್ಯ ನುಡಿದಿದ್ದವು. ಫಲಿತಾಂಶ ಬಂದಾಗಲೇ ನಮಗೆ ವಾಸ್ತವತೆ ತಿಳಿಯುತ್ತದೆ. ಜನರು ಇಂಡಿಯಾ ಕೂಟಕ್ಕೆ ಆಶೀರ್ವಾದವನ್ನು ನೀಡಿದ್ದಾರೆಂಬ ಸಂಪೂರ್ಣ ವಿಶ್ವಾಸವಿದೆ. ಪ್ರಸ್ತುತದ ಚುನಾವಣೆಗಳು ಮತ್ತು ವಾತಾವರಣವು ನಮ್ಮ ಪರವಾಗಿದೆ ಎಂದು ತಿಳಿಸಿದ್ದಾರೆ.

8:32 am, 23 Nov 2024

ಮಹಾಯುತಿ 31 ಸ್ಥಾನಗಳಲ್ಲಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ರಾಜ್ಯದ 288 ಸ್ಥಾನಗಳ ಪೈಕಿ 31 ಸ್ಥಾನಗಳಲ್ಲಿ ಮತ್ತು ಮಹಾ ವಿಕಾಸ್ ಅಘಾಡಿ 18ರಲ್ಲಿ ಮುನ್ನಡೆ ಸಾಧಿಸಿದೆ.

ಅಂಚೆ ಮತಪತ್ರಗಳ ಎಣಿಕೆ ಆರಂಭವಾದ ನಂತರ ಮಹಾಯುತಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

8:57 am, 23 Nov 2024

8:59 am, 23 Nov 2024

ಆರಂಭಿಕ ಮತ ಎಣಿಕೆಯಲ್ಲಿ ಮಹಾಯುತಿ MVA 115-62 ರಲ್ಲಿ ಮುನ್ನಡೆ ಸಾಧಿಸಿದೆ

ಮಹಾಯುತಿ 115 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.

(ಬಿಜೆಪಿ: 65; ಎಸ್‌ಎಚ್‌ಎಸ್: 30; ಎನ್‌ಸಿಪಿ: 20)

ಮಹಾ ವಿಕಾಸ್ ಅಘಾಡಿ ಒಕ್ಕೂಟವು 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

(INC: 29; SS(UBT): 17; NCP(SP): 14; ಇತರರು: 2)

9:02 am, 23 Nov 2024

ಸರ್ಕಾರ ರಚಿಸಲು 160 ಅಭ್ಯರ್ಥಿಗಳಿಂದ ಬೆಂಬಲ ಪತ್ರ ಸಂಗ್ರಹಿಸಿದ ಮಹಾ ವಿಕಾಸ್ ಅಘಾಡಿ

ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ತನ್ನ 160 ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಕೆಲವು ಸ್ವತಂತ್ರ ಅಭ್ಯರ್ಥಿಗಳಿಂದ ಬೆಂಬಲ ಪತ್ರಗಳನ್ನು ಸಂಗ್ರಹಿಸಿದೆ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸರ್ಕಾರ ರಚಿಸುವಲ್ಲಿ ಮೈತ್ರಿಗೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದೆ. 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಸಂಗ್ರಹಿಸಿದ ಬೆಂಬಲ ಪತ್ರಗಳನ್ನು ಫಲಿತಾಂಶ ಘೋಷಣೆಯ ನಂತರ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಂವಿಎ ಅಭ್ಯರ್ಥಿಗಳಲ್ಲದೆ, ಚುನಾವಣೆಯಲ್ಲಿ ಗೆಲ್ಲಬಹುದಾದ ಕೆಲವು ಸ್ವತಂತ್ರರು ಮತ್ತು ಬಂಡಾಯಗಾರರನ್ನೂ ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದರು.

ಎಂವಿಎಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಶರದ್ ಪವಾರ್‌ ಅವರ ಎನ್‌ಸಿಪಿ (ಎಸ್‌ಪಿ) ಮತ್ತು ಕಾಂಗ್ರೆಸ್ ನ್ನು ಒಳಗೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

9:05 am, 23 Nov 2024

ನಮಗೆ ಆತ್ಮವಿಶ್ವಾಸವಿದೆ, ಇಂಡಿಯಾ ಬ್ಲಾಕ್ ಪರ ಜನರ ಒಲವಿದೆ: ಅಶೋಕ್ ಗೆಲ್ಹೋಟ್

ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ , ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಲ್ಲಿ ಇಂಡಿಯಾ ಬಣ ಒಟ್ಟಾಗಿ ಹೋರಾಡಿರುವುದರಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಗೆಹ್ಲೋಟ್, ಎಕ್ಸಿಟ್ ಪೋಲ್ ನ್ನು ತಳ್ಳಿಹಾಕಿದ್ದಾರೆ.

"ಎಕ್ಸಿಟ್ ಪೋಲ್‌ಗಳು ನಮ್ಮ ವಿರುದ್ಧ ಮಾತನಾಡುತ್ತಿದ್ದರೆ, ಅವು ಹರಿಯಾಣದಲ್ಲಿ ನಮ್ಮ ಪರವಾಗಿವೆ. ಫಲಿತಾಂಶಗಳು ಬರಲು ಪ್ರಾರಂಭಿಸಿದಾಗ, ನಮಗೆ ಪರಿಸ್ಥಿತಿ ತಿಳಿಯುತ್ತದೆ. ಜನರು ಇಂಡಿಯಾ ಬ್ಲಾಕ್‌ಗೆ ತಮ್ಮ ಆಶೀರ್ವಾದವನ್ನು ನೀಡಿದ್ದಾರೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ. ಇಂಡಿಯಾ ಬ್ಲಾಕ್ ಹೋರಾಟ ಮಾಡಿದೆ. ವಾತಾವರಣವು ನಮ್ಮ ಪರವಾಗಿದೆ ಎಂದು ಹೇಳಿದರು.

9:10 am, 23 Nov 2024

ಮಹಾರಾಷ್ಟ್ರದಲ್ಲಿ ಆರಂಭಿಕ ಪ್ರವೃತ್ತಿಗಳನ್ನು ನೋಡಿದರೆ ಮಹಾಯುತಿ ಮೈತ್ರಿಕೂಟ100ರ ಗಡಿ ದಾಟುವ ಲಕ್ಷಣ ಕಾಣುತ್ತಿದೆ.

ವರ್ಲಿಯಿಂದ ಆದಿತ್ಯ ಠಾಕ್ರೆ ಮುನ್ನಡೆ; ಅವರು ಮಿಲಿಂದ್ ದಿಯೋರಾ ವಿರುದ್ಧ ಕಣಕ್ಕಿಳಿದಿದ್ದಾರೆ.

ಯುಗೇಂದ್ರ ಪವಾರ್ ಬಾರಾಮತಿಯಿಂದ ಹಿಂದುಳಿದಿದ್ದಾರೆ; ಅವರು ತಮ್ಮ ಚಿಕ್ಕಪ್ಪ ಅಜಿತ್ ಪವಾರ್ ವಿರುದ್ಧ ಕಣಕ್ಕಿಳಿದಿದ್ದಾರೆ.

ನಿತೇಶ್ ರಾಣೆ ಕಂಕಾವ್ಲಿಯಿಂದ ಮುನ್ನಡೆ ಸಾಧಿಸಿದ್ದಾರೆ.

9:36 am, 23 Nov 2024

ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 45 ಸ್ಥಾನಗಳಲ್ಲಿ, ಜೆಎಂಎಂ ನೇತೃತ್ವದ ಮೈತ್ರಿಕೂಟ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎಣಿಕೆ ನಡೆಯುತ್ತಿದ್ದು, ಆರಂಭಿಕ ಮುನ್ನಡೆಗಳು ಬಿಜೆಪಿ ನೇತೃತ್ವದ ಎನ್‌ಡಿಎ 45 ಸ್ಥಾನಗಳಲ್ಲಿ ಮುಂದಿದ್ದರೆ, ಜೆಎಂಎಂ ನೇತೃತ್ವದ ಮೈತ್ರಿಕೂಟ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

9:42 am, 23 Nov 2024

Summary

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಶನಿವಾರ ಎಣಿಕೆ ಆರಂಭವಾಗುತ್ತಿದ್ದಂತೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಗಿಂತ ಆರಂಭಿಕ ಮುನ್ನಡೆ ಸಾಧಿಸಿದೆ.

ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿಯು ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದಂತೆ ಎಂವಿಎ , ಪುನರಾಗಮನದ ಗುರಿಯನ್ನು ಹೊಂದಿದೆ.

ಎಕ್ಸಿಟ್ ಪೋಲ್‌ಗಳು MVA ಒಕ್ಕೂಟದ ಮೇಲೆ ಮಹಾಯುತಿ ಮೈತ್ರಿಗೆ ಸ್ಪಷ್ಟವಾದ ಗೆಲುವನ್ನು ನೀಡಿವೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 145.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 20 ಸುತ್ತುಗಳನ್ನು ಒಳಗೊಂಡಿರುತ್ತದೆ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕವಾಗಿ, ಜಾರ್ಖಂಡ್ ವಿಧಾನಸಭೆ ಚುನಾವಣೆ ಮತ್ತು 14 ರಾಜ್ಯಗಳ 48 ಸ್ಥಾನಗಳಲ್ಲಿ ಉಪಚುನಾವಣೆಯಲ್ಲಿ ಮತಗಳನ್ನು ಎಣಿಸಲಾಗುತ್ತದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕೇರಳದ ವಯನಾಡ್ ಹಾಗೂ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ತೀವ್ರ ಕುತೂಹಲ ಕೆರಳಿಸಿವೆ.

10:57 am, 23 Nov 2024

MVA ಯ ಆಘಾತಕಾರಿ ಹಿನ್ನಡೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಇದು ಮಹಾರಾಷ್ಟ್ರ ಮತದಾರರ ಆದೇಶವಲ್ಲ ಎಂದು ಉದ್ಧವ್ ಹೇಳಿದ್ದಾರೆ. ನಾವು ಈ ಫಲಿತಾಂಶಗಳನ್ನು ಸ್ವೀಕರಿಸುವುದಿಲ್ಲ. ಶಿವಸೇನೆ 60 ಸ್ಥಾನವನ್ನಷ್ಟೇ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ.

ಫಲಿತಾಂಶದಲ್ಲಿ ಏನೋ ತಪ್ಪಾಗಿದೆ ಎನ್ನುತ್ತಾರೆ ಸಂಜಯ್ ರಾವತ್. ಏಕನಾಥ್ ಶಿಂಧೆ ಶಾಸಕರು ಮಾತ್ರ ಹೀಗೆ ಗೆದ್ದು ಅಜಿತ್ ಪವಾರ್ ಅವರ ಬೆಂಬಲಿಗರು ಇಷ್ಟು ಸ್ಥಾನಗಳನ್ನು ಹೇಗೆ ಪಡೆಯಲು ಸಾಧ್ಯ ಎಂದು ಕೇಳುತ್ತಾರೆ. ಸದ್ಯದ ಫಲಿತಾಂಶ ಪ್ರಕಾರ ಮಹಾಯುತಿ: 217 ಸ್ಥಾನಗಳಲ್ಲಿ MVA: 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Comments


bottom of page