IPL 2026: ಗಾಯದ ಚಿತ್ರ ಹಂಚಿಕೊಂಡ ಕೃನಾಲ್ ಪಾಂಡ್ಯ: ನೋವಲ್ಲೂ ತಂಡಕ್ಕಾಗಿ ಹೋರಾಡಿದ್ದಕ್ಕೆ ಥ್ಯಾಂಕ್ಸ್ ಎಂದ ಫ್ಯಾನ್ಸ್!
- new waves technology
- 1 day ago
- 2 min read

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ರೋಚಕ ಗೆಲುವು ಸಾಧಿಸಲು 73 ರನ್ ಗಳಿಸಿ ಕೊಡುಗೆ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಇದೀಗ ತಮ್ಮ ಗಾಯವನ್ನು ಪ್ರದರ್ಶಿಸಿದ್ದಾರೆ. ರಾಯ್ಪುರದ ಟ್ರಿಕ್ಕಿ ಪಿಚ್ನಲ್ಲಿ 167 ರನ್ಗಳ ಸವಾಲಿನ ಚೇಸಿಂಗ್ನಲ್ಲಿ 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ಗಳೊಂದಿಗೆ 73 ರನ್ ಗಳಿಸಿದ ಸೆಳೆತದಿಂದಾಗಿ ಅಪಾರ ನೋವಿನಿಂದ ಕೂಡಿದ್ದರೂ ಅಪಾರ ಧೈರ್ಯ ಮತ್ತು ಶಾಂತತೆಯನ್ನು ಪ್ರದರ್ಶಿಸಿದ ಬರೋಡಾ ಆಲ್ರೌಂಡರ್ಗೆ ಇದು ಪ್ರಮುಖ ಇನಿಂಗ್ಸ್ ಆಗಿತ್ತು. ಪಂದ್ಯದ ನಂತರ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೃನಾಲ್, 'ಹೋರಾಡಲು ಯೋಗ್ಯವಾಗಿತ್ತು ಎಂಬುದಕ್ಕೆ ಕೆಲವು ಗಾಯಗಳು ಪುರಾವೆಯಾಗಿವೆ' ಎಂದು ಫೋಟೊ ಹಂಚಿಕೊಂಡಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಬ್ಯಾಟಿಂಗ್ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಕೃನಾಲ್ ಆರು ಇನಿಂಗ್ಸ್ಗಳಲ್ಲಿ 35.50 ಸರಾಸರಿ ಮತ್ತು 150.00 ಸ್ಟ್ರೈಕ್ ರೇಟ್ನಲ್ಲಿ 141 ರನ್ಗಳನ್ನು ಗಳಿಸಿದ್ದಾರೆ.
ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭುವನೇಶ್ವರ್ ಅವರ ಮಾಸ್ಟರ್ಕ್ಲಾಸ್ನಿಂದಾಗಿ ಮುಂಬೈ ತಂಡ ಪವರ್ಪ್ಲೇನಲ್ಲಿ 28/3 ಕ್ಕೆ ಕುಸಿಯಿತು. ಆದಾಗ್ಯೂ, ನಮನ್ ಧೀರ್ (32 ಎಸೆತಗಳಲ್ಲಿ 47, ಐದು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ) ಮತ್ತು ತಿಲಕ್ ವರ್ಮಾ (42 ಎಸೆತಗಳಲ್ಲಿ 57, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ) 82 ರನ್ಗಳ ಜೊತೆಯಾಟದೊಂದಿಗೆ ಇನಿಂಗ್ಸ್ ಕಟ್ಟಿದರು. ಮುಂಬೈ ತಂಡವು 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.
ಆರ್ಸಿಬಿ ಪರ ಭುವನೇಶ್ವರ್ (4/23) ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಜಾಶ್ ಹೇಜಲ್ವುಡ್ (1/33) ಮತ್ತು ರೊಮಾರಿಯೊ ಶೆಫರ್ಡ್ (ಮೂರು ಓವರ್ಗಳಲ್ಲಿ 1/18) ಮುಂಬೈ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ನೆರವಾದರು. ಈ ರನ್ ಗುರಿ ಬೆನ್ನತ್ತಿದ ಆರ್ಸಿಬಿ ಪರವಾಗಿ ವಿರಾಟ್ ಕೊಹ್ಲಿ (0) ಸತತ ಎರಡನೇ ಗೋಲ್ಡನ್ ಡಕ್ ಆದರು ಮತ್ತು ಅಂತಿಮವಾಗಿ 39/3ಕ್ಕೆ ಕುಸಿಯಿತು. ದೀಪಕ್ ಚಾಹರ್ (2/33) ಪಂದ್ಯದ ಗತಿಯನ್ನು ಬದಲಿಸಿದರು.
ಕೃನಾಲ್ ಪಾಂಡ್ಯ ಮತ್ತು ಜೇಕಬ್ ಬೆಥೆಲ್ (27 ಎಸೆತಗಳಲ್ಲಿ 26) ಅವರೊಂದಿಗೆ 55 ರನ್ಗಳ ಜೊತೆಯಾಟ ಮತ್ತು ಜಿತೇಶ್ ಶರ್ಮಾ (18) ಅವರೊಂದಿಗೆ 38 ರನ್ಗಳ ಜೊತೆಯಾಟ ತಂಡಕ್ಕೆ ನೆರವಾಯಿತು. ಆದಾಗ್ಯೂ, ಕಾರ್ಬಿನ್ ಬಾಷ್ (4/26) ಮತ್ತು ಅಲ್ಲಾಹ್ ಗಜನ್ಫರ್ (1/33) ನಿರ್ಣಾಯಕ ವಿಕೆಟ್ ಪಡೆದರು. ಕೃನಾಲ್ ಅವರನ್ನು ಸಹ ಔಟ್ ಮಾಡಿದರು. ಆಗ ಆರ್ಸಿಬಿ 18 ಓವರ್ಗಳಲ್ಲಿ 149/7ಕ್ಕೆ ಇಳಿಯಿತು.
ನಂತರ ರೊಮಾರಿಯೊ ಶೆಫರ್ಡ್ (11 ಎಸೆತಗಳಲ್ಲಿ 4) ಜಸ್ಪ್ರೀತ್ ಬುಮ್ರಾ (0/20) ವಿರುದ್ಧ ಹೋರಾಡಿದರು. ಇದರಿಂದಾಗಿ ಆರ್ಸಿಬಿಗೆ ಅಂತಿಮ ಓವರ್ನಲ್ಲಿ 12 ರನ್ ಅವಶ್ಯಕತೆ ಇತ್ತು. ರಾಜ್ ಅಂಗದ್ ಬಾವಾ ಅವರಿಂದ ಹೆಚ್ಚುವರಿ ರನ್ಗಳು ಮತ್ತು ಭುವನೇಶ್ವರ್ ಕುಮಾರ್ ಅವರಿಂದ ಬಂದ ಸಿಕ್ಸರ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡಿತು. ಅಂತಿಮವಾಗಿ ಎರಡು ರನ್ ಅಗತ್ಯವಿದ್ದಾಗ ರಸಿಕ್ ಸಲಾಂ ದಾರ್ (3*) ಎರಡು ರನ್ಗಳನ್ನು ಓಡುವ ಮೂಲಕ ತಂಡವು ರೋಚಕ ಗೆಲುವು ಸಾಧಿಸಿತು.
ಏಳು ಗೆಲುವುಗಳು ಮತ್ತು ನಾಲ್ಕು ಸೋಲುಗಳೊಂದಿಗೆ, ಆರ್ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ಮೂರು ಗೆಲುವುಗಳು ಮತ್ತು ಎಂಟು ಸೋಲುಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ಜೊತೆಗೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.





Comments