top of page


ಪಶ್ಚಿಮ ಏಷ್ಯಾ ಸಂಘರ್ಷ ಮಧ್ಯೆ ಪ್ರಧಾನಿ ಮೋದಿ ಯುಎಇ ಭೇಟಿ: ಇಂಧನ ಸಹಕಾರ, ತಂತ್ರಾತ್ಮಕ ತೈಲ ಸಂಗ್ರಹಕ್ಕೆ ಒತ್ತು; LPG ಒಪ್ಪಂದ ಸಾಧ್ಯತೆ
ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಹೆಚ್ಚುತ್ತಿರುವ ಹಾಗೂ ಪೂರೈಕೆ ವೈವಿಧ್ಯೀಕರಣದ ಅಗತ್ಯತೆ ಮತ್ತೊಮ್ಮೆ ಗಮನ ಸೆಳೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ನಡೆಯುತ್ತಿದೆ. ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಸಮೀಕರಣಗಳ ಬದಲಾವಣೆಯ ನಡುವಲ್ಲಿ, ನಾಳೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಪ್ರಮುಖ ಅಜೆಂಡಾವಾಗಿ ಇಂಧನ ಭದ್ರತೆ ಹೊರಹೊಮ್ಮಲಿದೆ. ಈ ವೇಳೆ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ನೆದರ್ಲ್ಯಾಂಡ್ಸ್,
new waves technology
7 days ago2 min read


ವೀಸಾಗೂ ಬಂತು ಥಾಮಸ್ ಕುಕ್ ವಿಮಾ ರಕ್ಷಣೆ: ಅರ್ಜಿ ತಿರಸ್ಕಾರಗೊಂಡರೆ ಚಿಂತಿಸಬೇಕಿಲ್ಲ!
ವೀಸಾ ನಿರಾಕರಣೆಯ ಸಂದರ್ಭದಲ್ಲಿ ಮರುಪಾವತಿಸಲಾಗದ ನಷ್ಟಗಳ ಬಗ್ಗೆ ದೀರ್ಘಕಾಲದ ಗ್ರಾಹಕರ ಕಳವಳಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮವು ಬಂದಿದೆ. ನವದೆಹಲಿ: ಪ್ರಯಾಣ ವೇದಿಕೆ ಥಾಮಸ್ ಕುಕ್ (ಭಾರತ) ಮತ್ತು ಅದರ ಸಮೂಹ ಸಂಸ್ಥೆ SOTC ಟ್ರಾವೆಲ್ ಸೋಮವಾರ ಪ್ರಯಾಣಿಕರಿಗೆ ಕ್ರಿಯಾತ್ಮಕ ಜಾಗತಿಕ ಪರಿಸರದ ಹಿನ್ನೆಲೆಯಲ್ಲಿ ವೀಸಾ ನಿರಾಕರಣೆಯ ವಿರುದ್ಧ ವಿಮೆಯನ್ನು ಒದಗಿಸಲು ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಗ್ರಾಹಕರ ವೀಸಾ ಅರ್ಜಿ (ವಲಸೆಗಾರ ಅಥವಾ ಉದ್ಯೋಗ ವೀಸಾ ಹೊರತುಪಡಿಸಿ) ತಿರಸ್ಕರಿಸಲ್ಪಟ್ಟರೆ, ಕಂಪನಿಯು ವಸತಿ ಮತ್ತು ಪ್ರಯಾಣಕ್ಕಾಗಿ ಮರುಪಡೆಯಲಾಗದ ಮುಂಗಡ ಪಾವತಿಗಳಿಗೆ ವಿ
new waves technology
Apr 211 min read


ಇವರು ಗೀತಾ ಮುಖರ್ಜಿ, ಎಲ್ಲರ ಪ್ರೀತಿಯ 'ಗೀತಾದಿ'; ಮಹಿಳಾ ಮೀಸಲಾತಿ ಕಾಯ್ದೆ ಹಿಂದಿನ ಪ್ರೇರಕ ಶಕ್ತಿ!
ಮಹಿಳಾ ಮೀಸಲಾತಿ ಮುಖ್ಯ ರಾಜಕೀಯ ಚರ್ಚೆಗೆ ಬರುವ ಬಹಳ ಹಿಂದೆಯೇ, ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಬೇಕು ಎಂದು ಅವರು ಗುರುತಿಸಿದ್ದರು. ನವದೆಹಲಿ: ಭಾರತ ಸರ್ಕಾರವು ಮಹಿಳೆಯರ ಪ್ರಾತಿನಿಧ್ಯದ ಪ್ರಶ್ನೆಯ ಕಡೆಗೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ, ಈ ಬೇಡಿಕೆಯ ಹಿಂದಿನ ಪ್ರಭಾವಶಾಲಿ ವ್ಯಕ್ತಿತ್ವ ಅಂದರೆ ಅವರು ಸಿಪಿಐ ಸಂಸದೆ ಗೀತಾ ಮುಖರ್ಜಿ, ಸ್ನೇಹದಿಂದ ‘ಗೀತಾದಿ’ ಎಂದು ಕರೆಯಲ್ಪಟ್ಟವರು. ಈ ಆಲೋಚನೆ ಈಗ ಕಾನೂನು ಜಾರಿಗೆ ಸಾಗುತ್ತಿರುವ ಸಂದರ್ಭದಲ್ಲಿ, ಅವರನ್ನು ನೆನಪಿಸುವುದು ಕೇವಲ ಗೌರವ ಸಲ್ಲಿಸುವುದು ಮಾತ್ರವಲ್ಲ, ಈ ಬೇಡಿಕೆಯ ದೀರ್ಘ ಮತ್ತು ಇನ್ನೂ ಪೂರ್ಣವಾಗದ ಇತಿಹಾ
new waves technology
Apr 181 min read


ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?
ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ ನೀಡುತ್ತಿದೆ. ಅಂದರೆ
new waves technology
Jan 301 min read


ಕಾಗದ ರಹಿತ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಬರೆದ ಮುನ್ನುಡಿ
ಸ್ವಾತಂತ್ರ್ಯಾನಂತರ ಭಾರತದಲ್ಲಿ ಮೊದಲು ಬಜೆಟ್ ಮಂಡಿಸಿದ್ದು 1947ರ ನವೆಂಬರ್ 26ರಂದು. ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು ಮೊದಲ ಬಜೆಟ್ ಮಂಡಿಸಿದ್ದರು. ಅಂದಿನಿಂದ 2020ರವರೆಗೂ ಬೀಫ್ಕೇಸ್ನಲ್ಲಿಟ್ಟ ಮುದ್ರಿತ ಬಜೆಟ್ ಪ್ರತಿಗಳನ್ನು ಓದುವ ಮೂಲಕ ಹಣಕಾಸು ಸಚಿವರು ವರ್ಷದ ಆಯವ್ಯಯ ಮಂಡಿಸುತ್ತಿದ್ದರು. ಆದರೆ, 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ನಿರ್ಮಲಾ, ಬೀಫ್ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು. ಅದರ ನಂತರ ಕೋವಿಡ್ ಬಳಿಕ 2021-22ನೇ ಸಾಲಿನಲ್ಲಿ ಮೊದಲ ಬಾರಿಗೆ ದೇಶದಲ್ಲಿ ಕಾಗದ ರಹಿತ ಬಜೆಟ್ ಪರಿಚಯಿಸಲಾಯಿತು. ಕೋವಿಡ್-19 ಹಿನ್ನೆಲೆಯಲ್
new waves technology
Jan 301 min read


ಊಟ, ತಿಂಡಿ ಸ್ಕಿಪ್ ಮಾಡೋದ್ರಿಂದ ಮತ್ತೂ ದಪ್ಪ ಆಗ್ತಿರಾ; ಹುಷಾರು! ಇಲ್ಲಿದೆ ಕಾರಣ
ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವೆಲ್ನೆಸ್ ಕ್ಷೇತ್ರದ ಅಂಕಿ ಅಂಶಗಳು. ಹಾಗಾದರೆ ನಾವು ಭಾರತೀಯರು ಹೀಗೆ ದಿನದಿಂದ ದಿನಕ್ಕೆ ದಪ್ಪಗಾಗುತ್ತಿರುವುದಕ್ಕೆ ಕಾರಣವೇನು? ಯಾವ ಸಂಗತಿಗಳು ನಮ್ಮನ್ನು ಈಪಾಟಿ ದಡೂತಿಗಳನ್ನಾಗಿ ಮಾಡುತ್ತಿದೆ? ಇದಕ್ಕೆ ಪರಿಹಾರವೇನು? ಯಾವ ರೀತಿಯ ಡಯಟಿಂಗ್ ಮಾಡಿದರೆ ನಾವು ತೆಳ್ಳಗಾಗಬಹುದು? ಇಂದಿನ ಮಧ್ಯವಯಸ್ಕ ಜನಾಂಗದ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನ
new waves technology
Jan 281 min read

