top of page


ವಿರಾಟ್ ಕೊಹ್ಲಿ, ಕತ್ರಿನಾ ಕೈಫ್ ಮನೆ ಪಕ್ಕದಲ್ಲೇ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ರೆಂಟ್ ಎಷ್ಟು ಗೊತ್ತಾ?
ಮುಂಬೈನಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ವಾಸಿಸುವ ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ಮನೆಯೊಂದನ್ನು ಅಲ್ಲು ಅರ್ಜುನ್ ಅವರು ಬಾಡಿಗೆ ಪಡೆದಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಯಶಸ್ಸಿನ ನಂತರ ʻರಾಕಾʼ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. 600 ಕೋಟಿ ರೂ.ಗಳಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ʻರಾಕಾʼ ಸಿನಿಮಾದ ಬಹುತೇಕ ಕೆಲಸಗಳು ಮುಂಬೈನಲ್ಲೇ ನಡೆಯುತ್ತಿವೆ. ಹೀಗಾಗಿ ಅಲ್ಲು ಅರ್ಜುನ್ ಅವರು ಈಗ ಮಾಯಾನಗರಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ಮುಂಬೈನಲ್ಲಿ ಖ
new waves technology
Apr 231 min read


ಕದನ ವಿರಾಮ ಒಪ್ಪಂದಕ್ಕೆ ಬೆಲೆ ಇಲ್ಲವೇ?: ಲೆಬನಾನ್ ಮೇಲೆ ಮುಂದುವರೆದ ಇಸ್ರೇಲ್ ದಾಳಿ, ಪತ್ರಕರ್ತೆ ಸೇರಿ ಐವರ ಸಾವು..!
ಇತ್ತೀಚೆಗೆ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ ಮಾಡಲಾಗಿತ್ತು. ಇದರಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಕೂಡ ಭಾಗಿಯಾಗಿತ್ತು. ಆದಾಗ್ಯೂ, ಹಿಂಸಾಚಾರ ಮುಂದುವರಿದಿರುವುದು ಒಪ್ಪಂದದ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ಮುಂದುವರಿದಿದ್ದು, ಲೆಬನಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದವಾಗಿದ್ದರೂ, ಹಿಂಸಾಚಾರ ಮುಂದುವರೆದಿದೆ. ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿರುವುದಾಗಿ ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಅಮೆರಿಕಾ ಮಧ್ಯಸ್ಥಿಕ
new waves technology
Apr 231 min read


IPL 2026: RRಗೆ ಸುಲಭದ ತುತ್ತಾದ LSG, ರಿಷಬ್ ಪಂತ್ ಪಡೆಗೆ ಸತತ 4ನೇ ಸೋಲು
ಇಂದು ಲಖನೌನ ಏಕಾನ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 40 ರನ್ ಗಳ ಹೀನಾಯ ಸೋಲುಕಂಡಿದೆ. ಲಖನೌ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋತಿದ್ದು, ಆ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಕಂಡಿದೆ. ಇಂದು ಲಖನೌನ ಏಕಾನ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 40 ರನ್ ಗಳ ಹೀನಾಯ ಸೋಲುಕಂಡಿದೆ. ರಾಜಸ್ತಾನ ನೀಡಿದ 160 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಲಕ್ನೋಗೆ ಬ್ಯಾಟಿಂಗ್ ವೈ
new waves technology
Apr 231 min read


'ಓಡೋರು ಓಡಲಿ, ಸುಸ್ತಾಗಿ ನೀರು ಕುಡಿಯೋಕೆ ಕೂರ್ತಾರೆ ನಾನು ರೇಸ್ ನಿಧಾನವಾಗಿ ಓಡ್ತೀನಿ: ಹಾಸನ ಕ್ಷೇತ್ರಕ್ಕೆ ಮುಂದಿನ ಕ್ಯಾಂಡಿಡೇಟ್ ನಾನೇ'
ಹೆಚ್ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ ಹಾಸನ: ನನ್ನ ಮನಸ್ಸಿನ ಇಚ್ಚೆ ನಾನು ಸಾರ್ವಜನಿಕವಾಗಿ ಹೇಳಿದ್ರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗೌರವ ತರಲ್ಲ. ನಾನು ಗೌರವವನ್ನು ಕಾಪಾಡಿಕೊಂಡು, ರಾಜಕಾರಣವನ್ನು ಮಾಡುವಂತ ಅನಿವಾರ್ಯತೆ ಇದೆ. ಹಾಗಾಗಿ ನಾನು ತಾಳ್ಮೆಯಿಂದ ಇದ್ದೀನಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಅಷ್ಟೇ, ಸಿದ್ದಾಂತದಲ್ಲಿ ರಾಜೀ
new waves technology
Apr 231 min read


ಇಂದು SSLC ರಿಸಲ್ಟ್: 8.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ಹೈಕೋರ್ಟ್ ಆದೇಶ ಹಿನ್ನೆಲೆ ಹಿಂದಿ ಗ್ರೇಡ್'ಗೆ ಕೊಕ್..!
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್.ಎಸ್.ಎಲ್.ಸಿ.ತೃತೀಯ ಭಾಷೆಗೆ ಹೈಕೋರ್ಟ್ ಆದೇಶ ದಂತೆ ಗ್ರೇಡ್ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮೊದಲೇ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಅದರಂತೆ ಇಂದು ಮಧ್ಯಾಹ್ನ (ಗುರುವಾರ) 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಇನ್ನು ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್.ಎಸ್.ಎಲ್.ಸಿ.ತೃತೀಯ ಭಾಷೆಗೆ ಹೈಕೋರ
new waves technology
Apr 231 min read


Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ
ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು: ಕಾರ್ಪೋರೇಟ್ ಜಗತ್ತಿನಲ್ಲಿ ಯಾರು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಒಂದಲ್ಲಾ ಒಂದು ದಿನ ಅವರ ಕೆಲಸಕ್ಕೆ ಕುತ್ತು ಬರುತ್ತದೆ. ಇಂತಹುದೇ ಮತ್ತೊಂದು ಘಟನೆ ಇದೀಗ ವೈರಲ್ ಆಗುತ್ತಿದೆ. ಹೌದು.. ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರಿನ ನಿಧಿ ಎಂಬ ಮಹಿ
new waves technology
Apr 212 min read


ಇರಾನ್ ಗೆ ಕ್ಷಿಪಣಿಗೆ ಬಳಸುವ ಕೆಮಿಕಲ್ಸ್ ರವಾನೆ ಬಯಲು: ಅಮೆರಿಕ ಕೆಂಗಣ್ಣಿಗೆ ಚೀನಾ ಗುರಿ!
ಯುದ್ಧದಲ್ಲಿ ಚೀನಾ ಇರಾನಿಯನ್ನರಿಗೆ ಸಹಾಯ ಮಾಡುವ ನಿರೀಕ್ಷೆಯು "ಇನ್ನು ಮುಂದೆ ನಿರ್ಲಕ್ಷಿಸಲಾಗದ ವಾಸ್ತವ" ಎಂದು ಅವರು ಹೇಳಿಕೊಂಡಿದ್ದಾರೆ. ವಾಷಿಂಗ್ ಟನ್: ದಿಗ್ಬಂಧನ ಹೇರಿದ ನಂತರ ಅಮೆರಿಕದ ನೌಕಾಪಡೆಯು ಹಾರ್ಮುಜ್ ಜಲಸಂಧಿಯಲ್ಲಿ ವಶಪಡಿಸಿಕೊಂಡ ಮೊದಲ ಇರಾನಿನ ಹಡಗು ಚೀನಾದಿಂದ ಪ್ರಯಾಣಿಸುತ್ತಿತ್ತು ಮತ್ತು ಅದು ಕ್ಷಿಪಣಿಗಳಿಗಾಗಿ ರಾಸಾಯನಿಕ ಸಾಗಣೆಗೆ ಸಂಬಂಧಿಸಿದ್ದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಸದಸ್ಯೆ ನಿಕ್ಕಿ ಹ್ಯಾಲಿ ಹೇಳಿದ್ದಾರೆ. "ಈ ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್
new waves technology
Apr 211 min read


BCCI ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್ಗೆ ಅತೃಪ್ತಿ; ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ಗೆ ಉದಯೋನ್ಮುಖ ತಾರೆಗಳಿಗೆ ಅವಕಾಶ?
T20 ಲೀಗ್ನ ಫೈನಲ್ ಮೇ 31 ರಂದು ನಡೆಯಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಜೂನ್ 6 ರಂದು ಪ್ರಾರಂಭವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ನಿಗದಿಪಡಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರದ ಬಗ್ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟೆಸ್ಟ್ ನಾಯಕ ಶುಭಮನ್ ಗಿಲ್ ಅತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. T20 ಲೀಗ್ನ ಫೈನಲ್ ಮೇ 31 ರಂದು ನಡೆಯಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಜೂನ್ 6 ರಂದು ಪ್ರಾರಂಭವಾಗಲಿದೆ. ಐಪಿಎಲ್ ಪ್ಲೇ-ಆಫ್ಗಳಲ್ಲಿ
new waves technology
Apr 212 min read


ವೀಸಾಗೂ ಬಂತು ಥಾಮಸ್ ಕುಕ್ ವಿಮಾ ರಕ್ಷಣೆ: ಅರ್ಜಿ ತಿರಸ್ಕಾರಗೊಂಡರೆ ಚಿಂತಿಸಬೇಕಿಲ್ಲ!
ವೀಸಾ ನಿರಾಕರಣೆಯ ಸಂದರ್ಭದಲ್ಲಿ ಮರುಪಾವತಿಸಲಾಗದ ನಷ್ಟಗಳ ಬಗ್ಗೆ ದೀರ್ಘಕಾಲದ ಗ್ರಾಹಕರ ಕಳವಳಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮವು ಬಂದಿದೆ. ನವದೆಹಲಿ: ಪ್ರಯಾಣ ವೇದಿಕೆ ಥಾಮಸ್ ಕುಕ್ (ಭಾರತ) ಮತ್ತು ಅದರ ಸಮೂಹ ಸಂಸ್ಥೆ SOTC ಟ್ರಾವೆಲ್ ಸೋಮವಾರ ಪ್ರಯಾಣಿಕರಿಗೆ ಕ್ರಿಯಾತ್ಮಕ ಜಾಗತಿಕ ಪರಿಸರದ ಹಿನ್ನೆಲೆಯಲ್ಲಿ ವೀಸಾ ನಿರಾಕರಣೆಯ ವಿರುದ್ಧ ವಿಮೆಯನ್ನು ಒದಗಿಸಲು ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಗ್ರಾಹಕರ ವೀಸಾ ಅರ್ಜಿ (ವಲಸೆಗಾರ ಅಥವಾ ಉದ್ಯೋಗ ವೀಸಾ ಹೊರತುಪಡಿಸಿ) ತಿರಸ್ಕರಿಸಲ್ಪಟ್ಟರೆ, ಕಂಪನಿಯು ವಸತಿ ಮತ್ತು ಪ್ರಯಾಣಕ್ಕಾಗಿ ಮರುಪಡೆಯಲಾಗದ ಮುಂಗಡ ಪಾವತಿಗಳಿಗೆ ವಿ
new waves technology
Apr 211 min read


ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ
ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಮೂಲಕ ಈ ಆದೇಶ ನೀಡಿದ್ದಾರೆ. ಬೆಂಗಳೂರು: 2025–26ನೇ ಸಾಲಿನ ಎಸ್ಎಸ್ಎಲ್ಸಿ ಮೂರನೇ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 15ರಂದು ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್ ಇಂದು ಮಂಗಳವಾರ ನಿರಾಕರಿಸಿದೆ. ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ ಗ್ರೇಡಿಂಗ್ ಪದ್ಧತಿಗೆ ಬದಲಾವಣೆ ಮಾಡುವ ಬೇಡಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿ ತನ್ನ ಆದೇಶದ ಯಥಾಸ್ಥಿತಿ ಕಾಯ್ದುಕೊಂಡ
new waves technology
Apr 211 min read


ಇವರು ಗೀತಾ ಮುಖರ್ಜಿ, ಎಲ್ಲರ ಪ್ರೀತಿಯ 'ಗೀತಾದಿ'; ಮಹಿಳಾ ಮೀಸಲಾತಿ ಕಾಯ್ದೆ ಹಿಂದಿನ ಪ್ರೇರಕ ಶಕ್ತಿ!
ಮಹಿಳಾ ಮೀಸಲಾತಿ ಮುಖ್ಯ ರಾಜಕೀಯ ಚರ್ಚೆಗೆ ಬರುವ ಬಹಳ ಹಿಂದೆಯೇ, ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಬೇಕು ಎಂದು ಅವರು ಗುರುತಿಸಿದ್ದರು. ನವದೆಹಲಿ: ಭಾರತ ಸರ್ಕಾರವು ಮಹಿಳೆಯರ ಪ್ರಾತಿನಿಧ್ಯದ ಪ್ರಶ್ನೆಯ ಕಡೆಗೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ, ಈ ಬೇಡಿಕೆಯ ಹಿಂದಿನ ಪ್ರಭಾವಶಾಲಿ ವ್ಯಕ್ತಿತ್ವ ಅಂದರೆ ಅವರು ಸಿಪಿಐ ಸಂಸದೆ ಗೀತಾ ಮುಖರ್ಜಿ, ಸ್ನೇಹದಿಂದ ‘ಗೀತಾದಿ’ ಎಂದು ಕರೆಯಲ್ಪಟ್ಟವರು. ಈ ಆಲೋಚನೆ ಈಗ ಕಾನೂನು ಜಾರಿಗೆ ಸಾಗುತ್ತಿರುವ ಸಂದರ್ಭದಲ್ಲಿ, ಅವರನ್ನು ನೆನಪಿಸುವುದು ಕೇವಲ ಗೌರವ ಸಲ್ಲಿಸುವುದು ಮಾತ್ರವಲ್ಲ, ಈ ಬೇಡಿಕೆಯ ದೀರ್ಘ ಮತ್ತು ಇನ್ನೂ ಪೂರ್ಣವಾಗದ ಇತಿಹಾ
new waves technology
Apr 181 min read


Vijay-Rashmika's Coorg Honeymoon: ಒಂದು ನೈಟ್ ಗೆ ರೆಸಾರ್ಟ್ ಗೆ ಕೊಟ್ಟಿದ್ದು ಎಷ್ಟು ಲಕ್ಷ ಗೊತ್ತಾ?
ಅಲ್ಲದೇ ಮಂದಣ್ಣ ತಮ್ಮ ಪ್ರೀತಿಪಾತ್ರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರಿಂದ ಮತ್ತಷ್ಟು ವಿಶೇಷಗೊಳಿಸಿತು ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹದ ನಂತರ ಪತಿ ವಿಜಯ್ ದೇವರಕೊಂಡ ಜೊತೆಗೆ ಇತ್ತೀಚಿಗೆ ಭೇಟಿ ನೀಡಿದ್ದ ರಶ್ಮೀಕಾ ಮಂದಣ್ಣ, ಕೂರ್ಗ್ನ ಎವೊಲ್ವ್ ಬ್ಯಾಕ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಇಲ್ಲಿಯೇ ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೊಡಗು ಸಂಪ್ರದಾಯದಂತೆ ಆರತಕ್ಷತೆ ಕೂಡಾ ನಡೆದಿತ್ತು. ರಶ್ಮಿಕಾ ಸಾಂಪ್ರದಾಯಿಕ ಕೂರ್ಗಿ ಸೀರೆ ಧರಿಸಿ ತಮ್ಮ ಪರಂಪರೆಗೆ ಗೌರವ ಸಲ್ಲಿಸಿದರು. ಬಳಿಕ Evolve Back Resorts
new waves technology
Apr 181 min read


ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ: ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ವೊಂದರ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಎರಡು ಗನ್ಬೋಟ್ಗಳು ಗುಂಡಿನ ದಾಳಿ ನಡೆಸಿವೆ ಎಂದು ಬ್ರಿಟಿಷ್ ಮಿಲಿಟರಿ ಶನಿವಾರ ತಿಳಿಸಿದೆ. ಟೆಹರಾನ್: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಲೇ ಹೋಗಿದೆ. ಇರಾನಿನ ಹಡಗು ಸಾಗಣೆ ಮತ್ತು ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇದೀಗ, ಓಪನ್ ಆಗಿದ್ದ ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ ಹೇರಿದೆ. ಇದಾದ ಬೆನ್ನಲ್ಲೇ ಹಾರ್ಮುಜ್
new waves technology
Apr 181 min read


IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್ಗಳ ಸಾಧಾರಣ ಗುರಿ ನೀಡಿದ RCB
ಇಂಡಿಯನ್ ಪ್ರಿಮಿಯರ್ ಲೀಗ್ ( IPL 2026 ) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ. ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB ಅತ್ಯುತ್ತಮ ಓಪನಿಂಗ್ ಪಡೆಯಿತು. 15 ಓವರ್ ಮುಕ್ತಾಯಕ್ಕೆ ತಂಡ 4 ವಿಕೆಟ್ ಕಳೆದುಕೊಂಡು 146 ರನ್ ಪೇರಿಸಿತ್ತು. ಆನಂತರ ಬ್ಯಾಟಿಂಗ್ ಮಂಕಾಯಿತು. ಅಂತಿಮವಾಗಿ ನಿಗದಿತ ಓವರ್ ನಲ್ಲಿ 8
new waves technology
Apr 181 min read


ಟ್ರಂಪ್ ಹೇಳಿದಂತೆ ಮೋದಿ ಜಿಗಿಯುತ್ತಾರೆ,ಮಲಗಿ ಅಂದ್ರೆ ಮಲಗುತ್ತಾರೆ: ರಾಹುಲ್ ಗಾಂಧಿ
ರಾಣಿಪೇಟೆ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ ಮುಖದಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ನೀವು ನೋಡಿದ್ದೀರಿ. ಅವರಿಗೆ ವಿಪಕ್ಷಗಳನ್ನು ಎದುರಿಸಲು ಸಾಧ್ಯವಾಗದೆ ಪಕ್ಕಕ್ಕೆ ತಿರುಗಿ ಕುಳಿತಿದ್ದರು. ಮೋದಿ ಜೀ ಅಮೆರಿಕದ ನಿಯಂತ್ರಣದಲ್ಲಿದ್ದು, ನಮ್ಮ ದೇಶವನ್ನೇ ಮಾರಾಟ ಮಾಡುವಂತಹ ಭಾರತ-ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿರುವುದೇ ಇದಕ್ಕೆ ಮುಖ್ಯ ಕಾರಣ' ಎಂದು ಟೀಕ
new waves technology
Apr 181 min read


ಬೈಕ್ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!
ಭದೋಹಿ (ಉತ್ತರ ಪ್ರದೇಶ): ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುತ್ತಿದ್ದ ದಲಿತ ಯುವಕನ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಜತೆಗೆ, ಬೈಕ್ನ ಕೀಯಿಂದ ಕಣ್ಣಿಗೆ ಚುಚ್ಚಿದ್ದರಿಂದ ದಲಿತ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿದ್ದ 20 ವರ್ಷದ ರಾಹುಲ್ನನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 'ಔರೈ ಪ್ರದೇಶದ ಕಾಲುವೆ ಬಳಿ ಶುಕ್ರವಾರ ಮಧ್ಯಾಹ್ನ ರಾಹುಲ್ ಬಯಲು ಬಹಿರ್ದೆಸೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುವುದನ್ನು
new waves technology
Feb 91 min read


ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ವಿರೋಧ ಪಕ್ಷಗಳು
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಇಂದು (ಸೋಮವಾರ) ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ಗೊತ್ತುವಳಿ ಮಂಡಿಸಲು ವಿರೋಧ ಪಕ್ಷಗಳು ಮುಂದಾಗಿವೆ ಎಂದು ವರದಿಯಾಗಿದೆ. ಸಂವಿಧಾನದ ವಿಧಿ 94-ಸಿ ಅಡಿಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗುತ್ತಿದೆ. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹ
new waves technology
Feb 91 min read


ಪವಾರ್ ಕುಟುಂಬಕ್ಕೆ ಮತ್ತೊಂದು ಶಾಕ್: ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಮುಂಬೈ: ಎನ್ಸಿಪಿ(ಎಸ್ಪಿ) ಮುಖ್ಯಸ್ಥ, ಪವಾರ್ ಕುಟುಂಬದ ಹಿರಿಯ ನಾಯಕ ಶರದ್ ಪವಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶರದ್ ಪವಾರ್ ಅವರು ಪುಣೆಯ ರೂಬಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 85 ವರ್ಷದ ಪವಾರ್ ಅವರು ಕೆಲ ದಿನಗಳಿಂದ ಗಂಟಲು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪವಾರ್ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಎರಡು ವಾರದ ಹಿಂದೆ ಪವಾರ್ ಅವರ ಸಹೋದರಳಿಯ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.
new waves technology
Feb 91 min read


ನರವಣೆಯವರ ಪುಸ್ತಕದ ಭಯದಿಂದ ಮೋದಿ ಸಂಸತ್ತಿಗೆ ಬರುತ್ತಿಲ್ಲ: ರಾಹುಲ್ ಗಾಂಧಿ
ನವದೆಹಲಿ: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆಯವರ ಪುಸ್ತಕಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭಾಷಣಕ್ಕೆ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಲೋಕಸಭೆಗೆ ಬರಲಿಲ್ಲ, ಸಂಸದರಿಗೆ ಹೆದರಿ ಅಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಸದಸ್ಯರಿಂದ ಮೋದಿಗೆ ಬೆದರಿಕೆ ಇದೆ ಎಂದಾದರೆ ಎಫ್ಐಆರ್ ದಾಖಲಿಸಿ ಎಂದೂ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ. ಪ್ರಧಾನಿಗೆ ವಿರೋಧ ಪಕ್ಷಗಳ ಸದಸ್ಯರಿಂದ ಬೆದರಿಕೆ ಇದೆ. ಹೀಗಾಗಿ ಸದನಕ್ಕೆ ಬರಬೇಡಿ ಎಂದು ನಾನೇ ಹೇಳಿದ್ದೆ ಎಂದು ಸ್ಪೀಕರ್ ಓಂ ಬಿರ್ಲಾ ಗುರುವಾರ ಹೇಳಿದ್ದರು. “ಬಜೆಟ್ ಮೇಲೆ ಚರ್ಚೆ ನಡೆಸಲು ಸರ್ಕಾರಕ್ಕೆ ಭಯ. ಯಾಕೆಂದರೆ
new waves technology
Feb 91 min read


ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಕೇಂದ್ರವಲ್ಲ: DCM
ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ, ಗ್ರಾಹಕ ಬೆಲೆ ಸೂಚ್ಯಂಕದನ್ವಯ ಈಗಿರುವ ದರ, ಇಂಧನ ವೆಚ್ಚ ಮುಂತಾವುಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಎಂಆರ್ಸಿಎಲ್ ದರ ಏರಿಕೆ ಮಾಡುತ್ತದೆ. ಪರಿಷ್ಕೃತ ದರದೊಂದಿಗೆ ಬನ್ನಿ ಎಂದು ನಾನು ಅವರಿಗೆ ಸೂಚಿಸಿದ್ದೇನೆ' ಎಂದು ಅವರು ಹೇಳಿದರು. 'ದೆಹಲಿಯಲ್ಲಿ ಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅದರ ವೆಚ್ಚ ಅಧಿಕ. ಹೀಗಾಗಿ ದರವನ್ನು ಮತ್ತೊಮ್ಮೆ
new waves technology
Feb 91 min read


ಭಾರತ-ಪಾಕ್ ಯುದ್ಧ ಇತ್ಯರ್ಥ: ವ್ಯಾಪಾರ ಒಪ್ಪಂದ ಬಳಿಕವೂ ಟ್ರಂಪ್ ಅದೇ ರಾಗ!
ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧ ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಟ್ಟಿರುವ ಬೆನ್ನಲ್ಲೇ ಟ್ರಂಪ್ ಮಗದೊಮ್ಮೆ ಭಾರತ-ಪಾಕ್ ಸಂಘರ್ಷವನ್ನು ಇತ್ಯರ್ಥಗೊಳಿಸಿರುವುದಾಗಿ ಹೇಳಿದ್ದಾರೆ. ಈ ಹೇಳಿಕೆಯನ್ನು ಒಂದೇ ದಿನದಲ್ಲಿ ಟ್ರಂಪ್ ಎರಡು ಸಲ ಪುನರಾವರ್ತಿಸಿದ್ದಾರೆ. 'ಒಂದು ವರ್ಷದ ಅವಧಿಯಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಕಾಂಬೋಡಿಯಾ-ಥಾಯ್ಲೆಂಡ್, ಕೊಸೊವೊ-ಸರ್ಬಿಯ, ಭಾರತ-ಪಾಕಿಸ್ತಾನ, ಇಸ್ರೇಲ್-ಇರಾನ್, ಅರ್ಮೇನಿಯಾ ಹಾಗೂ
new waves technology
Feb 61 min read


ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್ಎಸ್ಎಸ್ ಧ್ವಜ ಯಾತ್ರೆ
ಶ್ರೀನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕುರಿತಾಗಿ 'ತಪ್ಪು ಕಲ್ಪನೆಗಳನ್ನು' ನಿವಾರಿಸುವ ಉದ್ದೇಶದಿಂದ ಶುಕ್ರವಾರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ‘ಧ್ವಜ ಯಾತ್ರೆ' ಆರಂಭವಾಗಿದೆ. ಇಲ್ಲಿನ ಐತಿಹಾಸಿಕ ಲಾಲ್ಚೌಕ್ನಿಂದ ಯಾತ್ರೆ ಆರಂಭವಾಯಿತು. ನೂರಾರು ಕಾರ್ಯಕರ್ತರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ತೆರಳಿದರು. ಆರ್ಎಸ್ಎಸ್ ಕೆಲ ಜನರ ವಿರುದ್ಧ ಇದೆ ಎಂಬ 'ತಪ್ಪು ಕಲ್ಪನೆಯನ್ನು ನಿವಾರಿಸುವುದೇ ಈ ಯಾತ್ರೆಯ ಉದ್ದೇಶ. ಈ ಮೂಲಕ ನಾವು ಜನರಿಗೆ ಸರಿಯಾದ ಸಂದೇಶ ರವಾನಿಸುವುದಾಗಿದೆ ಎಂದುಆರ್ಎಸ್ಎಸ್ನ ವೀರ ಕಪೂರ್ ತಿಳಿಸಿದ್ದಾರೆ. ಆರ್ಎಸ್ಎಸ್ ಪ್ರಾರಂಭವಾಗಿ ನೂರ
new waves technology
Feb 61 min read


RCB Title: ಮೊದಲು ಕಪ್ ಬರ;ಈಗ ಸತತ ಮೂರು ವರ್ಷಗಳಿಂದ ಆರ್ಸಿಬಿ ಮನೆಗೆ 3ನೇ ಕಪ್!
ವಡೋದರ: ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರಾಡ್ರಿಗಸ್ (57 ರನ್, 37 ಎಸೆತ) ಹಾಗೂ ಶಿನೆಲ್ ಹೆನ್ರಿ (35 ರನ್, 15 ಎಸೆತ) ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 203 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ನಾಯಕಿ ಸ್ಮೃತಿ ಮಂದಾನ (87 ರನ್, 41 ಎಸೆತ) ಹಾಗೂ ಜಾ
new waves technology
Feb 62 min read


Ranji|ಕನ್ನಡಿಗರ ವೇಗದ ದಾಳಿಗೆ ತತ್ತರಿಸಿದಮುಂಬೈ: ಅಲ್ಪಮೊತ್ತಕ್ಕೆ ಅಲೌಟ್
ಮುಂಬೈ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ನೇ ಸಾಲಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮುಂಬೈ ತಂಡ ಕೇವಲ 120 ರನ್ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವನ್ನು ಕರ್ನಾಟಕದ ಬೌಲರ್ಗಳು ಕಾಡಿದರು. ಆರಂಭದಿಂದಲೂ ಮುಂಬೈ ಬ್ಯಾಟರ್ಗಳ ಮೇಲೆ ಮೇಲುಗೈ ಸಾಧಿಸಿದ ರಾಜ್ಯ ತಂಡದ ಬೌಲರ್ಗಳು, ಅಖಿಲ್ ಹೇರ್ವಾಡ್ಕರ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ ಅನ್ನು ಕ್ರೀಸ್ ಕಚ್ಚಿ ಆಡಲು ಬಿಡಲಿಲ್ಲ. ಪರಿಣಾಮ ಮುಂಬೈ 48.1 ಓವರ್ಗಳಲ್ಲಿ 120 ರನ್ಗಳಿಗೆ
new waves technology
Feb 61 min read

