top of page


ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ
ಮಂಗಳೂರು: 'ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರ ಮಾತನ್ನು ಗೌರವದಿಂದ ಸ್ವೀಕರಿಸುವೆ' ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಪುತ್ತೂರಿನಲ್ಲಿ ಪಕ್ಷದ ಕಚೇರಿಗೆ ಭೂಮಿಪೂಜೆ ನೆರವೇರಿಸಲು ಬಂದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಐದು ವರ್ಷ ತಮ್ಮ ತಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಅದಕ್ಕೆ ಹೈಕಮಾಂಡ್ ಒಪ್ಪಿದ್ದು ಹಸಿರು ನಿಶಾನೆಯನ್ನೂ ತೋರಿಸಿದೆ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಹೇಳಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಡಿಕೆಶಿ 'ಯತೀಂದ್ರ ಮಾತಿಗೆ ಪ್ರತ
new waves technology
Feb 61 min read


ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ: ಅಪರಾಧಿಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರ್ಯಾನ್ ವೆಸ್ಲಿ ರೂತ್ಗೆ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 2024ರ ಸೆಪ್ಟೆಂಬರ್ 15ರಂದು ಫ್ಲೋರಿಡಾದ ಗಾಲ್ಫ್ ಕೋರ್ಸ್ನಲ್ಲಿ ಆಡುತ್ತಿದ್ದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯೂ ಆಗಿದ್ದ ಟ್ರಂಪ್ ಅವರನ್ನು ಕೊಲ್ಲಲ್ಲು ರೂತ್ ಯತ್ನಿಸಿದ್ದನು. ಈ ಪ್ರಕರಣದಲ್ಲಿ ರೂತ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಶಿಕ್ಷೆಯನ್ನು ಪ್ರಕಟಿಸಿರುವ ಜಿಲ್ಲಾ ನ್ಯಾಯಾಧೀಶೆ ಐಲೀನ್ ಕ್ಯಾನನ್, 'ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆ ಮಾಡಲು ಆರೋಪಿಯು ಹಲವು ತಿಂಗಳುಗಳಿಂದ ಸಂ
new waves technology
Feb 51 min read


ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ವಿಚಾರ: ಲೋಕಸಭೆಯಲ್ಲಿ ಮುಂದುವರಿದ ಗದ್ದಲ
ನವದೆಹಲಿ: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು. ಇನ್ನೊಂದೆಡೆ, ನೆಹರೂ-ಗಾಂಧಿ ಕುಟುಂಬದ ಬಗೆಗಿನ ಮಾಹಿತಿಗಳನ್ನು ಬಹಿರಂಗಪಡಿಸಲು ಸರಣಿ ಪುಸ್ತಕಗಳನ್ನು ತಂದಿದ್ದು, ಅವುಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಒತ್ತಾಯಿಸಿದರು. - ಇವುಗಳ ಪರಿಣಾಮ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಬುಧವಾರವೂ ಮುಂದುವರಿದು, ಕಲಾಪ ಗದ್ದಲ
new waves technology
Feb 51 min read


ಮೈಸೂರು: ಏಳು ಕಡೆ ಲೋಕಾಯುಕ್ತ ಪೊಲೀಸರ ದಾಳಿ
ಮೈಸೂರು: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟಿಕಲ್ ಇನ್ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಅಧಿಕಾರಿಗಳ ಕಚೇರಿ, ಮನೆ ಸಹಿತ ಏಳು ಕಡೆ ದಾಳಿ ನಡೆಸಿದ್ದಾರೆ. ವಿಜಯನಗರ ಮೊದಲ ಹಾಗೂ ಎರಡನೇ ಹಂತದಲ್ಲಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆದಿದೆ.
new waves technology
Feb 51 min read


ವಿಧಾನಸಭೆ: ಸದನದ ಘನತೆ ಕೆಡಿಸಿದ ನಾಯಿ, ಕೋತಿ ಪದ
ಬೆಂಗಳೂರು: 'ಲೇ ಆರೆಸ್ಸೆಸ್ನವಾ ...ಥ ನಿಮ್ಮ... ಅಯೋಗ್ಯರಾ.. ಯಾಕೆ ಕೂಗಾಡ್ತೀರಿ... ನಿಮಗೆ ಬೆಂಕಿ ಹಾಕಾ. ಅಸೆಂಬ್ಲಿಗೆ ಬಂದು ಡಾನ್ಸ್ ಮಾಡ್ತೀರಾ? ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ? ನಿಮ್ಮಂತ ನೂರು ನಾಯಿಗಳು ಬಂದರೂ ನಾನು ಹೆದರಲ್ಲ...' ಹೀಗೆಂದು ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯರ ವಿರುದ್ಧ ಕೂಗಾಡಿದ್ದು ಕಾಂಗ್ರೆಸ್ನ ಕೆ.ಎಂ.ಶಿವಲಿಂಗೇಗೌಡ, 'ವಿಬಿ ಜಿ ರಾಮ್ ಜಿ' ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ್ದ ನಿರ್ಣಯದ ಪರ ಮಾತನಾಡಲು ನಿಂತ ತಮಗೆ ಅಡ್ಡಿಪಡಿಸಿದರು ಎಂದು ರೊಚ್ಚಿಗೆದ್ದ ಗೌಡರು ಬಿಜೆಪಿ-ಜೆಡಿಎಸ್ ಸದಸ್ಯರನ್ನು ನಾಯಿ, ಕೋತಿ ಎಂದೆಲ್ಲ ಬೈದಾಡಿದರು. ಶಿವಲಿಂಗೇಗೌಡ ಅವರ ನಿಂದನೆ
new waves technology
Feb 52 min read


ಬೆಂಗಳೂರು ಮೆಟ್ರೊ ಪ್ರಯಾಣ ದರ ಶೇ 5ರಷ್ಟುಏರಿಕೆ: ಸರ್ಕಾರದ ಸಮ್ಮತಿ
ಬೆಂಗಳೂರು: ಒಂದು ವರ್ಷದ ಹಿಂದಷ್ಟೇ 'ನಮ್ಮ ಮೆಟ್ರೊ' ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್ಸಿಎಲ್ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಇದೇ 9ರ ಸೋಮವಾರ ದಿಂದಲೇ ಹೊಸ ದರ ಜಾರಿಗೆ ಬರಲಿದೆ. ದರವು ಕನಿಷ್ಠ ₹1 ಹಾಗೂ ಗರಿಷ್ಠ ₹5ರಷ್ಟು ಹೆಚ್ಚಳವಾಗಲಿದೆ. ಕನಿಷ್ಠ ₹10 ಇರುವ ದರ ₹11ಕ್ಕೆ, ಗರಿಷ್ಠ ₹90 ಇರುವ ದರ ₹95ಕ್ಕೆ ಏರಲಿದೆ. ಬಿಎಂಆರ್ಸಿಎಲ್ ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್ಎಫ್ಸಿ) 2025ರಲ್ಲಿ ಶಿಫಾರಸು ಮಾಡಿತ್ತು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ
new waves technology
Feb 51 min read


ರಾಜ್ಯಪಾಲರ ಅಂಗಳಕ್ಕೆ ಮತ್ತೆ 'ಒಳ ಮೀಸಲು'
ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರೂಪಿಸಿದ್ದ ಮಸೂದೆ ಕುರಿತು ರಾಜ್ಯಪಾಲರು ಎತ್ತಿದ್ದ ಪ್ರಶ್ನೆಗಳಿಗೆ ವಿವರವಾದ ಸ್ಪಷ್ಟಿಕರಣ ಕೊಟ್ಟಿರುವ ಸರ್ಕಾರ, ಅಂಕಿತಕ್ಕಾಗಿ ಮತ್ತೆ ಮಸೂದೆಯನ್ನು ಲೋಕಭವನಕ್ಕೆ ಕಳುಹಿಸಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಲು ಹೊರಡಿಸಿದ್ದ ಆದೇಶಕ್ಕೆ ಕಾನೂನು ಬಲ ನೀಡುವ ಉದ್ದೇಶದಿಂದ 'ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ- 2025' ಅನ್ನು ಸರ್ಕಾರ ರೂಪಿಸಿತ್ತು. ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿಅನುಮೋದನೆಗೊಂಡಿದ್ದ ಈ ಮಸೂದೆಯನ್ನು ಅಂಕಿತಕ್
new waves technology
Feb 41 min read


ವಿಧಾನಸಭೆ: ವಿಬಿ ಜಿ ರಾಮ್ ಜಿ ವಿರೋಧಿಸಿನಿರ್ಣಯ
ಬೆಂಗಳೂರು: ವಿರೋಧಪಕ್ಷಗಳ ಆಕ್ಷೇಪ ಮತ್ತು ಗದ್ದಲದ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಬಿ ಜಿ ರಾಮ್ ಜಿ' ಕಾಯ್ದೆ ರದ್ದುಪಡಿಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು. ನಿರ್ಣಯದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, 'ಇದು ಸದನದ ನಿರ್ಣಯವಾಗಲು ಸಾಧ್ಯವಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಣಯ ಎಂದು ಬೇಕಾದರೆ ಮಂಡಿಸಿ ನಮ್ಮ ತಕರಾರಿಲ್ಲ' ಎಂದರು. ಆಕ್ಷೇಪಕ್ಕೆ ಜಗ್ಗದ ಮುಖ್ಯಮಂತ್ರಿ ನಿರ್ಣಯವನ್ನು ಓದಿದರು. ಈ ವೇಳೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲ
new waves technology
Feb 41 min read


ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ | ಕೃಷಿ, ಹೈನುಗಾರಿಕೆಗೆ ರಕ್ಷಣೆ: ಗೋಯಲ್
ನವದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುತ್ತಿದ್ದು, ಕೃಷಿ ಮತ್ತು ಹೈನುಗಾರಿಕೆ ವಲಯಗಳ ಹಿತಾಸಕ್ತಿ ಯನ್ನು ಒಪ್ಪಂದದ ಪರಿಣಾಮದಿಂದ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದರು. ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಸುಂಕ ಶೇಕಡ 50ರಷ್ಟು ಇದ್ದಿದ್ದನ್ನು ಶೇ 18ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ನಂತರದಲ್ಲಿ ಗೋಯಲ್ ಪತ್ರಿಕಾಗೋಷ್ಠಿ ನಡೆಸಿದರು. ಅಮೆರಿಕ ಮತ್ತು ಭಾರತ ಜಂಟಿ ಹೇಳಿಕೆಯೊಂದನ್ನು ಶೀಘ್ರವೇ ಹೊರಡಿಸಲಿವೆ, ಅದು ಒಪ್ಪಂದದ ವಿವರಗಳನ್ನು ಒಳಗೊಂಡಿರುತ್ತದೆ ಎಂ
new waves technology
Feb 41 min read


ಸಂಸತ್ನಲ್ಲಿ ಮತ್ತೆ ಗದ್ದಲ: ವಿರೋಧ ಪಕ್ಷದ 8 ಸಂಸದರ ಅಮಾನತು
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರಪತಿ ಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನಿರಾಕರಿಸಿದ್ದು ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವು ಲೋಕಸಭೆಯಲ್ಲಿ ಮಂಗಳವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪರಿಣಾಮವಾಗಿ, ಕಲಾಪವು ಹಲವು ಬಾರಿ ಮುಂದೂಡಿಕೆಯಾಯಿತು. ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಕಾಂಗ್ರೆಸ್ನ ಏಳು ಮತ್ತು ಸಿಪಿಎಂನ ಒಬ್ಬರು ಸಂಸದರನ್ನು ಅಮಾನತು ಮಾಡಲಾಯಿತು. ದಿನದ ಆರಂಭದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವಾಗಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು. ಮಧ್ಯ
new waves technology
Feb 41 min read


ವಿಧಾನಸಭೆಯಲ್ಲಿ BJP-JDS ಅಹೋರಾತ್ರಿ ಧರಣಿ: ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು
ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರು ಸದನದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದರು. ಸದನದಲ್ಲಿಯೇ ರಾತ್ರಿಯ ಭೋಜನ ಸೇವಿಸಿದ ನಂತರ, ಅಲ್ಲಿಯೇ ನಿದ್ದೆ ಮಾಡಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದನಕ್ಕೆ ಬಂದು ಧರಣಿನಿರತರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಖಾದರ್, 'ಬಿಜೆಪಿಯವರು ಸದನದಲ್ಲಿ ರಾತ್ರಿಯಿಡೀ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಅವರ ಜೊತೆಗೆ ಮಾತನಾಡಿದ್ದೇನೆ. ಮಾತನಾಡುವುದು ನಮ್ಮ ಕರ್ತವ್ಯ. ಧರಣಿ ನ
new waves technology
Feb 41 min read


ಚಿಂತಾಮಣಿ: ಹಿಂದೂಗಳಿಗೆ ಹಣ್ಣು ಹಂಪಲು ಪಾನೀಯ ನೀಡಿದ ಮುಸ್ಲಿಮರು
ಚಿಂತಾಮಣಿ: ನಗರದಲ್ಲಿ ಹಿಂದೂ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮುಸ್ಲಿಮರು ಹಣ್ಣು ಹಂಪಲು, ತಂಪು ಪಾನೀಯ ವಿತರಣೆ ಮಾಡಿದರು. ಈ ಮೂಲಕ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದರು. ನಗರದಲ್ಲಿ ಎಂದಿಗೂ ಹಿಂದೂ-ಮುಸ್ಲಿಂ ಘರ್ಷಣೆಯ ಸಣ್ಣ ಪುಟ್ಟ ಘಟನೆಗಳು ನಡೆದಿಲ್ಲ. ಇದೇ ಪರಂಪರೆಯನ್ನು ಮುಮದುವರೆಸಿಕೊಂಡು ಹೋಗಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಸ್ಲಿಂ ಮುಖಂಡರು ತಿಳಿಸಿದರು. ಭಾವೈಕ್ಯತೆಯ ಬುನಾದಿಯನ್ನು ಮತ್ತಷ್ಟು ಬಲಪಡಿಸಿ ದೇಶದ ಏಕತೆ ಎತ್ತಿಹಿಡಿಯಲು ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದ್ದವರಿಗೆ ಸ್ವಾಗತ ನೀಡಿ ತಂಪು ಪಾನೀ
new waves technology
Feb 31 min read


ಮೋದಿ ಜತೆ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಅಂತಿಮ ಎಂದ ಟ್ರಂಪ್
ನವದೆಹಲಿ/ ವಾಷಿಂಗ್ಟನ್: 'ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಘೋಷಿಸಿದ್ದಾರೆ. 'ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕವು ಪ್ರತಿಸುಂಕವನ್ನು ಪ್ರಸ್ತುತ ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ' ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ತಿಳಿಸಿದ್ದಾರೆ. 'ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಶೂನ್ಯ ಸುಂಕ ವಿಧಿಸಲಿದೆ' ಎಂದೂ ಹೇಳಿಕೊಂಡಿದ್ದಾರೆ. ಟ್ರಂಪ್ ಅ
new waves technology
Feb 31 min read


ಸಂಪಾದಕೀಯ: ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು: ಘನತೆಯ ಬದುಕಿಗೆ ಮಹತ್ವದ ಹೆಜ್ಜೆ
ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಮಹಿಳೆಯ ಘನತೆಯ ಬದುಕಿನತ್ತ ಇರಿಸಲಾದ ಮತ್ತೊಂದು ಹೊಸ ಹೆಜ್ಜೆ. ಸಂವಿಧಾನದ 21ನೇ ವಿಧಿ ಪ್ರಕಾರ ಬದುಕುವ ಹಕ್ಕೆಂಬುದು ಘನತೆಯಿಂದ ಬದುಕುವ ಹಕ್ಕನ್ನೂ ಒಳಗೊಳ್ಳುತ್ತದೆ. 'ಮುಟ್ಟಿನ ನೈರ್ಮಲ್ಯ ಸೌಕರ್ಯ'ಗಳು ಆರೋಗ್ಯದ ವಿಚಾರ ಮಾತ್ರವಲ್ಲ, ಅದೊಂದು ಸಾಂವಿಧಾನಿಕ ಹಕ್ಕು ಎಂದು ಈ ತೀರ್ಪು ಗುರುತಿಸಿದೆ. ಮುಟ್ಟಿನ ನೈರ್ಮಲ್ಯದ ಸೌಕರ್ಯಗಳು ಹೆಣ್ಣುಮಗುವಿನ ಬದುಕು, ಘನತೆ, ಆರೋಗ್ಯ ಹಾಗೂ ಶಿಕ್ಷಣದ ಹಕ್ಕಿನ ಅಂತರ್ಗತ ಭಾಗ ಎಂದೂ ಕೋರ್ಟ್ ಹೇಳಿದೆ. ಹೀಗಾಗಿ, ಎಲ್ಲ ಶಾಲೆಗಳಲ್
new waves technology
Feb 32 min read


ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: 'ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ನಡುವೆಯೇ, ಅವರ ಈ ಮಾತು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಕ್ಕೆ ಕಾರಣವಾಗಿದೆ. ವಂದನಾ ನಿರ್ಣಯದ ಚರ್ಚೆಗೆ ಸೋಮವಾರ ಉತ್ತರ ನೀಡುತ್ತಿರುವ ಮಧ್ಯೆ ಅಧಿಕಾರ ಹಂಚಿಕೆಯ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಪಕ್ಕದ ಆಸನದಲ್ಲಿ ಕುಳಿತಿದ್ದ ಡಿ.ಕೆ. ಶಿವಕುಮಾರ್ ಕಡೆಗೆ ನೋಡಿ, 'ಸಿಎಂಗೂ ಡಿ.ಕೆ. ಶಿವಕುಮಾರ್ಗೂ ಜಗಳವಿದೆ ಅ
new waves technology
Feb 31 min read


ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ: ಲೋಕಸಭೆಯಲ್ಲಿ ಕೋಲಾಹಲ
ನವದೆಹಲಿ: ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್ನಲ್ಲಿ ನಡೆದ ಸೇನಾ ತಿಕ್ಕಾಟದ ಬಗ್ಗೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸೋಮವಾರ ಪ್ರಸ್ತಾಪಿಸಿದ್ದು ಭಾರಿ ಗದ್ದಲ ಎಬ್ಬಿಸಿತು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದು, ಕೋಲಾಹಲಕ್ಕೆ ಕಾರಣವಾಯಿತು. ರಾಹುಲ್ ಅವರು ಅಪ್ರಕಟಿತ ಪುಸ್ತಕದ ಕುರಿತು ಪ್ರಸ್ತಾಪಿಸಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜ
new waves technology
Feb 31 min read


ಜಾತ್ರೆಲಿ ಭರ್ಜರಿ ನೃತ್ಯ ಮಾಡಿದ ಐಪಿಎಸ್ ವಸುಂಧರಾ! ತೆಲಂಗಾಣದ ಮೊನಾಲಿಸಾ ಎಂದ ಜನ
ಬೆಂಗಳೂರು: ತೆಲಂಗಾಣದ ಪ್ರಸಿದ್ದ ಜಾತ್ರಾ ಮಹೋತ್ಸವ ಆಗಿರುವ ಮುಲುಗು ಜಿಲ್ಲೆಯ ತಾಂಡಾವಿ ತಾಲ್ಲೂಕಿನ ಮೇದರಂ 'ಸಮ್ಮಕ್ಕ-ಸರಳಮ್ಮ' ಜಾತ್ರಾ ಮಹೋತ್ಸವ ಭರ್ಜರಿಯಾಗಿ ನಡೆಯುತ್ತಿದ್ದು, ಸುತ್ತಲಿನ ಜಿಲ್ಲೆಗಳ ಜನರಿಗೆ ಪ್ರಸಿದ್ಧ ಜಾತ್ರಾ ಸ್ಥಳವಾಗಿದೆ. ಸಮ್ಮಕ್ಕ-ಸರಳಮ್ಮ ಜಾತ್ರಾ ಮಹೋತ್ಸವದಲ್ಲಿ ಒಬ್ಬ ಯುವ ಐಪಿಎಸ್ ಅಧಿಕಾರಿ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಅವರೇ ತೆಲಂಗಾಣದ ಯುವ ಐಪಿಎಸ್ ವಸುಂಧರಾ ಯಾದವ್. ಸದ್ಯ ವಸುಂಧರಾ ಯಾದವ್ ಅವರು ತೆಲಂಗಾಣದ ಕಮ್ಮಂ ಜಿಲ್ಲೆಯ ಕಲ್ಲೂರಿನ ಎಸಿಪಿಯಾಗಿದ್ದಾರೆ. ಇವರಿಗೆ ಸಮ್ಮಕ್ಕ-ಸರಳಮ್ಮ ಜಾತ್ರಾ ಮಹೋತ್ಸವದ ಭದ್ರತಾ ಉಸ್ತುವಾರಿಯನ್ನು ವಹಿಸಲಾಗಿದೆ. -ಜಾತ್ರ
new waves technology
Jan 311 min read


ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ
ನವದೆಹಲಿ: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್ಟಿ ಫೆ. 1ರಿಂದ ಜಾರಿಗೆ ಬರಲಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ. 2017ರ ಜುಲೈ 1ಕ್ಕೆ ಜಾರಿಗೆ ಬಂದ ಜಿಎಸ್ಟಿಯಲ್ಲಿ ಸಿಗರೇಟು ಮತ್ತು ಪಾನ್ ಮಸಾಲಾ ಮೇಲೆ ಹಾಲಿ ಇರುವ ಶೇ 28ರ ಜಿಎಸ್ಟಿ ಬದಲಾಗಲಿದೆ. ಆರೋಗ್ಯದ ಮೇಲೆ ಹಾನಿ ಮಾಡಬಹುದಾದ ಈ ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಕೂಡಾ ಈಗ ವಿಧಿಸಲಾಗಿದೆ. ಈ ಉತ್ಪನ್ನಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ಆಧಾರಿತ ಮೌಲ್ಯಮಾಪನ ಕಾರ್ಯವಿಧಾನವೂ ಫೆ. 1ರಿಂದ ಜಾರಿಗೆ ಬರಲಿದೆ. ಇದರ
new waves technology
Jan 311 min read


ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ
ತುಮಕೂರು: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ. ತುಮಕೂರು: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ. ವಾಹನ ಬಿಡುಗಡೆ ಮಾಡಲು ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ₹40 ಸಾವಿರ ಹಣವನ್ನು ಕ್ಯಾತ್ಸಂದ್ರ ಬಳಿಯ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹ
new waves technology
Jan 311 min read


ವಿಲಾಸಿ, ವಿವಾದ, ವಿದಾಯ: ಕಾನ್ಸಿಡೆಂಟ್ ಗ್ರೂಪ್ನ ಸಿ.ಜೆ.ರಾಯ್ ಸಂಕೀರ್ಣ ಬದುಕು
ಬೆಂಗಳೂರು: ಸಾವಿರಾರು ಕೋಟಿಯ ಒಡೆಯನಾಗಿ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಸಿಡೆಂಟ್ ಗ್ರೂಪ್ನ ಸಿ.ಜೆ. ರಾಯ್ ಅವರ ಸಾವು ಆಘಾತ ಸೃಷ್ಟಿಸಿದೆ. ಅದ್ಭುತ ಯಶಸ್ಸು, ನಿರಂತರ ವಿವಾದಗಳು ಹಾಗೂ ತಮ್ಮ ಸಾರ್ವಜನಿಕ ಗುರುತನ್ನು ಮರಳಿ ಪಡೆಯಲು ಅವರು ಮಾಡುತ್ತಿದ್ದ ಇನ್ನಿಲ್ಲದ ಪ್ರಯತ್ನಗಳು ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ರಾಯ್ ಅವರ ಬೇರು ಕರ್ನಾಟಕದ್ದೇ ಆದರೂ, ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಿಸ್ತರಿಸಿ ರಿಯಲ್ ಎಸ್ಟೇಟ್ನಲ್ಲೇ ಹೆಸರು ಮಾಡಿದವರು. ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ, ತುಮಕೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗದ ನಂತರ ಸಣ
new waves technology
Jan 311 min read


ಹಾಸನ |ನಿವೇಶನ ವಿವಾದ: ನಟ ಯಶ್ ತಾಯಿಜಗಳ
ಹಾಸನ: ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಇರುವುದಾಗಿ ಈ ಹಿಂದೆ ದೇವರಾಜು ಅವರು, ಪುಷ್ಪಾ ಅರುಣ್ಕುಮಾರ್ ಹಾಕಿದ್ದ ಕಾಂಪೌಂಡ್ ಹಾಗೂ ಶೆಡ್ ತೆರವು ಮಾಡಿದ್ದರು. ಈಗ ಮತ್ತೆ ಕಾಂಪೌಂಡ್ ಹಾಕಲು ಪುಷ್ಪ ಅರುಣ್ಕುಮಾರ್ ಮುಂದಾಗಿದ್ದರು. 'ಆರು ವರ್ಷದ ಹಿಂದೆ ನಿವೇಶನ ಖರೀದಿಸಿದ್ದೇನೆ' ಎಂದ ಪುಷ್ಪಾ ಅರುಣ್ ಕುಮಾರ್, 'ಇದೇ ಕಾರಣಕ್ಕೆ ಕಂಪೌಂಡ್ ಹಾಕಿದ್ದೇನೆ' ಎಂದಿದ್ದರು. ಆದರೆ, ಅದನ್ನು ಒ
new waves technology
Jan 311 min read


ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?
ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ ನೀಡುತ್ತಿದೆ. ಅಂದರೆ
new waves technology
Jan 301 min read


ಮಹಾತ್ಮಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 78ನೇ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. ದೆಹಲಿಯ ರಾಜ್ಘಾಟ್ನಲ್ಲಿನ ಮಹಾತ್ಮಗಾಂಧಿ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ. 'ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಪೂಜ್ಯ ಬಾಪು ಅವರು ಯಾವಾಗಲೂ ಸ್ವದೇಶಿ ವಸ್ತುಗಳ ಬ
new waves technology
Jan 301 min read


PV Web Exclusive: 2ឥឥឥដಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಕುಂಭಮೇಳ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಸೂರ್ಯೋದಯಕ್ಕೆ ಮುನ್ನ ಕೆರೆಯಂಗಳದಲ್ಲಿ ಹಕ್ಕಿಗಳದೇ ಕಲರವ, ಚೂರುಪಾರು ಮೋಡಗಳು ಚದುರಿ ಆಗಸದಲ್ಲಿ ನೇಸರನ ಕಿರಣ ಮೂಡುತ್ತ ಬೆಳಕು ಹರಿಯುತ್ತಿದ್ದಂತೆಯೇ ಬಾನಂಗಳದಲ್ಲಿ ರಂಗೋಲಿ ಬಿಡಿಸಿದಂತೆ ಬಣ್ಣಬಣ್ಣದ ಚಿತ್ತಾರ, ಗುಂಪಾಗಿ ಹಾರಾಡುವ ಹಕ್ಕಿಗಳ ರೆಕ್ಕೆಗಳಿಂದ ಬೀಸುವ ತಂಗಾಳಿ ಸುಂಯ್ ಸುಂಯ್ ಎನ್ನುವ ಭಾವ, ನೂರಾರು ಗೂಡುಗಳಲ್ಲಿ ಮರಿಗಳಿಗೆ ತುತ್ತು ತಿನ್ನಿಸುವ ಸಂಭ್ರಮ, ನೀರಿಗೆ ಜಿಗಿದು ಮೀನು ಹಿಡಿದು ಕೊಕ್ಕಿನಲ್ಲಿ ಕಚ್ಚಿ ಸಾಗಿಸುವ ಉತ್ಸಾಹ...ನೋಡುತ್ತಿದ್ದರೆ ಮನದಲ್ಲಿ ಮೂಡುವ ರಸಋಷಿ ಕುವೆಂಪು. ದೇವರು ರುಜು ಮಾಡಿದನು ಎಂಬ ಅಮೋಘ ಉಪಮೆ... ಇದೆಲ್ಲ ಏನ
new waves technology
Jan 301 min read

